ಅತ್ಯುನ್ನತ ರಾಜಗೋಪುರ ಹೊಂದಿರುವ ದೇವಾಲಯಗಳು ಕೆಲವೇ ಕೆಲವುಗಳಲ್ಲಿ ಈ ದೇವಸ್ಥಾನವು ಒಂದಾಗಿದೆ. ರಾಜಗೋಪುರದಿಂದ ಗಣಪತಿಯ ಸನ್ನಿಧಾನ ಬೇರೆಲ್ಲೂ ಇಲ್ಲವೆನ್ನಬಹುದು.
ರಾಜ್ಯ ಹೆದ್ದಾರಿಯಲ್ಲಿನ ಈ ರಾಜಗೋಪುರದ ವೈಭವದ ನಡುವೆ ಭಕ್ತರನ್ನು ಹರಸುತ್ತಿರುವ ಸಿದ್ಧಿವಿನಾಯಕನ ದರ್ಶನ ಪಡೆದು ಭಕ್ತರು ಧನ್ಯತೆ ಅನುಭವಿಸುತ್ತಿದ್ದಾರೆ.
ಸಿದ್ಧಿವಿನಾಯಕ ಭಕ್ತರ ಅಭೀಷ್ಠಗಳನ್ನು ಸಿದ್ಧಿಸುತ್ತಾನೆಂಬ ಬಲವಾದ ನಂಬಿಕೆಯಿದೆ. ಹಲವು ಭಕ್ತರು ತಮ್ಮ ಕೋರಿಕೆ ಈಡೇರಿದ್ದಕ್ಕಾಗಿ ಹರಕೆ ಒಪ್ಪಿಸುತ್ತಿರುತ್ತಾರೆ
ಅಗಸ್ತ್ಯಋಷಿ ಮುನಿಗಳ ಕಲ್ಯಾಣಿ ತೀಥ೯ವನ್ನೂ, ಜಡೇ ಕಲ್ಲು,ಗಣೇಶ ಪ್ರದಶಿ೯ನಿ,ಬೆಳ್ಳಿ ರಥ,ಬೆಳ್ಳಿ ಪಲ್ಲಕ್ಕಿ, ಸುಂದರ ಹಾಗೂ ದಪ೯ಣಕಲೆಯ ವೈವಿಧ್ಯತೆಯ ರಾಜಗೋಪುರ ಹಾಗೂ ಯಾಗಶಾಲೆ, ನೀವು ಇಲ್ಲಿ ನೋಡಬಹುದು.
ವಿಶ್ವದ ಪ್ರಸಿದ್ಧ ಐತಿಹಾಸಿಕ ದೇವಾಲಯಗಳಲ್ಲಿ ಒಂದಾಗಿದೆ. ಶಿವಮೊಗ್ಗದ ಹೊಸನಗರ ತಾಲ್ಲೂಕಿನ ಕಾರಣಗಿರಿ ಎಂಬ ಗ್ರಾಮದಲ್ಲಿದೆ.